ಪ್ರೌಢಶಾಲಾ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
ಪ್ರೌಢಶಾಲಾ ಶಿಕ್ಷಕರ ಸಭೆ-ಸಿ.ಎಸ್.ಷಡಾಕ್ಷರಿ
ಪ್ರೌಢಶಾಲಾ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
1. ಸಾರ್ವಜನಿಕ ಶಿಕ್ಷಣ ಇಲಾಖೆಯ
ಎಲ್ಲಾ ವೃಂದದ ವೃಂದ ಮತ್ತು
ನೇಮಕಾತಿ ನಿಯಮಗಳ ಸಮಗ್ರ ತಿದ್ದುಪಡಿ
ಮಾಡುವುದು. 2. ಪ್ರಾಥಮಿಕ ಶಾಲಾ ಶಿಕ್ಷಕರ
ಹುದ್ದೆಯಿಂದ ಪ್ರೌಢಶಾಲಾ ಹುದ್ದೆಗಳಿಗೆ ಪದೋನ್ನತಿ
ಹೊಂದಿದ ಬಡ್ತಿ ಪ್ರೌಢಶಾಲಾ ಶಿಕ್ಷಕರುಗಳಿಗೆ
ಪದೋನ್ನತಿಯಿಂದಾಗಿ 10, 15, 20,
25 ಮತ್ತು 30 ಸೇವಾ ವರ್ಷಗಳ ಕಾಲಬದ್ಧ
ಮುಂಬಡ್ತಿಗಳು ಆರ್ಥಿಕ ಇಲಾಖೆಯ 2002 & 2012ರ
ಆದೇಶಗಳಿಂದಾಗಿ ಲಭ್ಯವಾಗದ ಕಾರಣ ಪದೋನ್ನತಿ
ಶಿಕ್ಷಕರ ಜೊತೆ ಒಂದೇ ಸಮಯದಲ್ಲಿ
ಸೇವೆಗೆ ಸೇರಿ ಪದೋನ್ನತಿ ಪಡೆಯದೆ,
ಆಯ್ಕೆಯ ಹುದ್ದೆಯಲ್ಲಿ ಎಲ್ಲಾ 10, 15, 20, 25 ಮತ್ತು 30 ಸೇವಾ ವರ್ಷಗಳ
ಕಾಲಬದ್ಧ ಮುಂಬಡ್ತಿಗಳನ್ನು ಪಡೆದ ಶಿಕ್ಷಕರುಗಳಿಗಿಂತ ಕಡಿಮೆ
ವೇತನವನ್ನು ಪಡೆಯುತ್ತಿದ್ದಾರೆ. ಒಂದೇ ಶಾಲೆಯಲ್ಲಿ ಸಮಾನ
ಸೇವೆಗೆ ಸೇರಿದ ಶಿಕ್ಷಕರ ವೇತನ
ಹೆಚ್ಚಿದ್ದು, ಅದೇ ಶಾಲೆಯಲ್ಲಿ ಬಡ್ತಿ
ಹೊಂದಿದ ಶಿಕ್ಷಕರ ವೇತನ ಕಡಿಮೆ
ಇರುತ್ತದೆ. ಈ ಸಮಸ್ಯೆಯ
ಪರಿಹಾರಕ್ಕಾಗಿ ರಾಜ್ಯ 6ನೇ ವೇತನ
ಆಯೋಗದ 2ನೇ ಸಂಪುಟದ
ವರದಿಯಲ್ಲಿ ಶಿಫಾರಸ್ಸು ಮಾಡಿದ್ದು, ವರದಿಯಲ್ಲಿನ
ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸುವುದು. 3. ಕಳೆದ 10-12 ವರ್ಷಗಳಿಂದ ನೆನೆಗುದಿಯಲ್ಲಿರುವ ಪ್ರೌಢಶಾಲಾ
ಸಹ ಶಿಕ್ಷಕರ ಹುದ್ದೆಯಿಂದ
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ
ಉಪನ್ಯಾಸಕರ ಹುದ್ದೆಗೆ ಬಡ್ತಿ
ನೀಡುವುದು. ಈ ಸಂಬಂಧ
ಸಾರ್ವಜನಿಕ ಶಿಕ್ಷಣ ಇಲಾಖೆಯು ಜೇಷ್ಠತೆಯು
ಸಿದ್ದಪಡಿಸಿ ಪ.ಪೂ.ಶಿಕ್ಷಣ ಇಲಾಖೆಗೆ ಪ್ರಸ್ತಾವನೆ
ಸಲ್ಲಿಸುವುದು. 4. ಪ್ರತಿ ವರ್ಷ ಖಾಲಿಯಾಗುವ
ಅರ್ಹ ಸಹ ಶಿಕ್ಷಕರಿಗೆ
ಮುಖ್ಯ ಶಿಕ್ಷಕರು ಹಾಗೂ ಉಪನ್ಯಾಸಕರ
ಹುದ್ದೆಗಳಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ
02 ಬಾರಿ ಬಡ್ತಿಯನ್ನು ನೀಡುವುದು.5. ಸಾರ್ವಜನಿಕ ಶಿಕ್ಷಣ ಇಲಾಖೆಯ
ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿನ
ಸಹ ಶಿಕ್ಷಕ ವೃಂದದಿಂದ
ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ
ಖಾಲಿ ಇರುವ ಹುದ್ದೆಗಳಿಗೆ ಕೂಡಲೇ
ಬಡ್ತಿ ನೀಡಲು ಕ್ರಮವಹಿಸುವುದು.6. ದಿನಾಂಕ 1-8-2008ರ ಪೂರ್ವದಲ್ಲಿ
ನೇಮಕ ಹೊಂದಿದ ಶಿಕ್ಷಕರುಗಳಿಗೆ ವಿಶೇಷ
ಭತ್ಯೆ ರೂ. 400/-ಗಳನ್ನು ಪಡೆಯುತ್ತಿದ್ದು,
ತದನಂತರ ನೇಮಕಗೊಂಡು ರಾಜ್ಯದ ಪ್ರೌಢಶಾಲೆಗಳಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಈ ಭತ್ಯೆಯು
ದೊರೆಯುತ್ತಿಲ್ಲವಾದ್ದರಿಂದ ವೇತನ ತಾರತಮ್ಯವಾಗುತ್ತಿದ್ದು, ಈ
ತಾರತಮ್ಯವನ್ನು ಸರಿಪಡಿಸಲು ದಿನಾಂಕ 1-8-2008ರ
ನಂತರ ನೇಮಕ ಹೊಂದಿದ ಶಿಕ್ಷಕರುಗಳಿಗೂ
ವಿಶೇಷ ಭತ್ಯೆ ರೂ. 400/-ಗಳನ್ನು
ಮಂಜೂರು ಮಾಡುವುದು. 7. ರಾಜ್ಯದ ಸರ್ಕಾರಿ ಪದವಿ
ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ)
ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ
ಸಹಶಿಕ್ಷಕರಿಗೆ ಗಳಿಕೆ
ರಜೆ ಮತ್ತು ಪ್ರಭಾರ
ಭತ್ಯೆ ಮಂಜೂರಾತಿ ಮಾಡುವುದು.8. ಬ್ಯಾಕ್ಲಾಗ್ ಹುದ್ದೆಗಳನ್ನು
(ಪ.ಜಾತಿ/ಪ.ಪಂ) ಕಾಲಕಾಲಕ್ಕೆ ಭರ್ತಿ
ಮಾಡುವಂತೆ ಹಿಂದುಳಿದ ವರ್ಗದ ಮೀಸಲು
ಹುದ್ದೆಗಳಿಗೆ ಪ್ರತೀ ವರ್ಷ ಬಡ್ತಿ
ನೀಡುವುದು. 9. ಪ್ರೌಢ ಶಾಲಾ ಸಹ
ಶಿಕ್ಷಕರಿಗೆ ಕಾಲಮಿತಿ ಬಡ್ತಿ ನೀಡುವಾಗ
ಪದನಾಮೀಕರಿಸಿ ಆರ್ಥಿಕ ಸೌಲಭ್ಯ ನೀಡುವುದು
(10 ವರ್ಷ ಮೇಲ್ಪಟ್ಟ ಸಹ ಶಿಕ್ಷಕರುಗಳಿಗೆ-ಹಿರಿಯ ಸಹ ಶಿಕ್ಷಕರು
ಎಂದು ಪದನಾಮೀಕರಿಸುವುದು) 10. ಸಹಶಿಕ್ಷಕರಿಗೆ ಬಡ್ತಿ ನೀಡುವ ಸಂದರ್ಭದಲ್ಲಿ
ಮು.ಶಿ. ವಿಷಯ
ಪರೀವೀಕ್ಷಕರು, ಉಪ ಪ್ರಾಂಶುಪಾಲರು
ಇತ್ಯಾದಿ ಹುದ್ದೆಗಳಲ್ಲಿ ಅವಕಾಶ ನೀಡುವುದು. 11. ಪ್ರೌಢಶಾಲಾ ಶಿಕ್ಷಕ ಮತ್ತು
ವಿದ್ಯಾರ್ಥಿಗಳ ಅನುಪಾತವನ್ನು 40:1ರಂತೆ ನಿಗದಿಗೊಳಿಸುವುದು. 12. ಪ್ರತಿ ಉಪನಿರ್ದೇಶಕರ ಕಛೇರಿಯಲ್ಲಿ
ಎಲ್ಲಾ ವಿಷಯದ ವಿಷಯ ಪರಿವೀಕ್ಷಕರಿದ್ದು,
ಹಿಂದಿ ಭಾಷಾ ವಿಷಯ ಪರಿವೀಕ್ಷಕರ
ಹುದ್ದೆ ಇಲ್ಲದಿರುವುದರಿಂದ ಹಿಂದಿ ವಿಷಯ ಪರಿವೀಕ್ಷಕರ
ಹುದ್ದೆಯನ್ನು ಸೃಜಿಸುವುದು ಮತ್ತು ಈ ಹುದ್ದೆಗಳಿಗೆ
ಪ್ರೌಢಶಾಲೆಗಳ ಹಿಂದಿ ಸಹ ಶಿಕ್ಷಕರನ್ನೇ
ಪರಿಗಣಿಸುವುದು.13. ಸಾರ್ವಜನಿಕ ಶಿಕ್ಷಣ ಇಲಾಖೆಯ
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ನ್ಯೂನತೆಗಳಿದ್ದು, ಸರಿಪಡಿಸಿ
ಸ್ಪಷ್ಟ ವರ್ಗಾವಣೆ ಕಾಯ್ದೆಯನ್ನು ಜಾರಿಗೊಳಿಸುವುದು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಹಾಗೂ ಕೇಂದ್ರ ಸಂಘದ ಪಧಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಭಾಗವಹಿಸಿ ಮೇಲ್ಕಂಡ ಬೇಡಿಕೆಗಳ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
1. ಸಾರ್ವಜನಿಕ ಶಿಕ್ಷಣ ಇಲಾಖೆಯ
ಎಲ್ಲಾ ವೃಂದದ ವೃಂದ ಮತ್ತು
ನೇಮಕಾತಿ ನಿಯಮಗಳ ಸಮಗ್ರ ತಿದ್ದುಪಡಿ
ಮಾಡುವುದು.
2. ಪ್ರಾಥಮಿಕ ಶಾಲಾ ಶಿಕ್ಷಕರ
ಹುದ್ದೆಯಿಂದ ಪ್ರೌಢಶಾಲಾ ಹುದ್ದೆಗಳಿಗೆ ಪದೋನ್ನತಿ
ಹೊಂದಿದ ಬಡ್ತಿ ಪ್ರೌಢಶಾಲಾ ಶಿಕ್ಷಕರುಗಳಿಗೆ
ಪದೋನ್ನತಿಯಿಂದಾಗಿ 10, 15, 20,
25 ಮತ್ತು 30 ಸೇವಾ ವರ್ಷಗಳ ಕಾಲಬದ್ಧ
ಮುಂಬಡ್ತಿಗಳು ಆರ್ಥಿಕ ಇಲಾಖೆಯ 2002 & 2012ರ
ಆದೇಶಗಳಿಂದಾಗಿ ಲಭ್ಯವಾಗದ ಕಾರಣ ಪದೋನ್ನತಿ
ಶಿಕ್ಷಕರ ಜೊತೆ ಒಂದೇ ಸಮಯದಲ್ಲಿ
ಸೇವೆಗೆ ಸೇರಿ ಪದೋನ್ನತಿ ಪಡೆಯದೆ,
ಆಯ್ಕೆಯ ಹುದ್ದೆಯಲ್ಲಿ ಎಲ್ಲಾ 10, 15, 20, 25 ಮತ್ತು 30 ಸೇವಾ ವರ್ಷಗಳ
ಕಾಲಬದ್ಧ ಮುಂಬಡ್ತಿಗಳನ್ನು ಪಡೆದ ಶಿಕ್ಷಕರುಗಳಿಗಿಂತ ಕಡಿಮೆ
ವೇತನವನ್ನು ಪಡೆಯುತ್ತಿದ್ದಾರೆ. ಒಂದೇ ಶಾಲೆಯಲ್ಲಿ ಸಮಾನ
ಸೇವೆಗೆ ಸೇರಿದ ಶಿಕ್ಷಕರ ವೇತನ
ಹೆಚ್ಚಿದ್ದು, ಅದೇ ಶಾಲೆಯಲ್ಲಿ ಬಡ್ತಿ
ಹೊಂದಿದ ಶಿಕ್ಷಕರ ವೇತನ ಕಡಿಮೆ
ಇರುತ್ತದೆ. ಈ ಸಮಸ್ಯೆಯ
ಪರಿಹಾರಕ್ಕಾಗಿ ರಾಜ್ಯ 6ನೇ ವೇತನ
ಆಯೋಗದ 2ನೇ ಸಂಪುಟದ
ವರದಿಯಲ್ಲಿ ಶಿಫಾರಸ್ಸು ಮಾಡಿದ್ದು, ವರದಿಯಲ್ಲಿನ
ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸುವುದು.
3. ಕಳೆದ 10-12 ವರ್ಷಗಳಿಂದ ನೆನೆಗುದಿಯಲ್ಲಿರುವ ಪ್ರೌಢಶಾಲಾ
ಸಹ ಶಿಕ್ಷಕರ ಹುದ್ದೆಯಿಂದ
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ
ಉಪನ್ಯಾಸಕರ ಹುದ್ದೆಗೆ ಬಡ್ತಿ
ನೀಡುವುದು. ಈ ಸಂಬಂಧ
ಸಾರ್ವಜನಿಕ ಶಿಕ್ಷಣ ಇಲಾಖೆಯು ಜೇಷ್ಠತೆಯು
ಸಿದ್ದಪಡಿಸಿ ಪ.ಪೂ.ಶಿಕ್ಷಣ ಇಲಾಖೆಗೆ ಪ್ರಸ್ತಾವನೆ
ಸಲ್ಲಿಸುವುದು.
4. ಪ್ರತಿ ವರ್ಷ ಖಾಲಿಯಾಗುವ
ಅರ್ಹ ಸಹ ಶಿಕ್ಷಕರಿಗೆ
ಮುಖ್ಯ ಶಿಕ್ಷಕರು ಹಾಗೂ ಉಪನ್ಯಾಸಕರ
ಹುದ್ದೆಗಳಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ
02 ಬಾರಿ ಬಡ್ತಿಯನ್ನು ನೀಡುವುದು.
5. ಸಾರ್ವಜನಿಕ ಶಿಕ್ಷಣ ಇಲಾಖೆಯ
ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿನ
ಸಹ ಶಿಕ್ಷಕ ವೃಂದದಿಂದ
ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ
ಖಾಲಿ ಇರುವ ಹುದ್ದೆಗಳಿಗೆ ಕೂಡಲೇ
ಬಡ್ತಿ ನೀಡಲು ಕ್ರಮವಹಿಸುವುದು.
6. ದಿನಾಂಕ 1-8-2008ರ ಪೂರ್ವದಲ್ಲಿ
ನೇಮಕ ಹೊಂದಿದ ಶಿಕ್ಷಕರುಗಳಿಗೆ ವಿಶೇಷ
ಭತ್ಯೆ ರೂ. 400/-ಗಳನ್ನು ಪಡೆಯುತ್ತಿದ್ದು,
ತದನಂತರ ನೇಮಕಗೊಂಡು ರಾಜ್ಯದ ಪ್ರೌಢಶಾಲೆಗಳಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಈ ಭತ್ಯೆಯು
ದೊರೆಯುತ್ತಿಲ್ಲವಾದ್ದರಿಂದ ವೇತನ ತಾರತಮ್ಯವಾಗುತ್ತಿದ್ದು, ಈ
ತಾರತಮ್ಯವನ್ನು ಸರಿಪಡಿಸಲು ದಿನಾಂಕ 1-8-2008ರ
ನಂತರ ನೇಮಕ ಹೊಂದಿದ ಶಿಕ್ಷಕರುಗಳಿಗೂ
ವಿಶೇಷ ಭತ್ಯೆ ರೂ. 400/-ಗಳನ್ನು
ಮಂಜೂರು ಮಾಡುವುದು.
7. ರಾಜ್ಯದ ಸರ್ಕಾರಿ ಪದವಿ
ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ)
ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ
ಸಹಶಿಕ್ಷಕರಿಗೆ ಗಳಿಕೆ
ರಜೆ ಮತ್ತು ಪ್ರಭಾರ
ಭತ್ಯೆ ಮಂಜೂರಾತಿ ಮಾಡುವುದು.
8. ಬ್ಯಾಕ್ಲಾಗ್ ಹುದ್ದೆಗಳನ್ನು
(ಪ.ಜಾತಿ/ಪ.ಪಂ) ಕಾಲಕಾಲಕ್ಕೆ ಭರ್ತಿ
ಮಾಡುವಂತೆ ಹಿಂದುಳಿದ ವರ್ಗದ ಮೀಸಲು
ಹುದ್ದೆಗಳಿಗೆ ಪ್ರತೀ ವರ್ಷ ಬಡ್ತಿ
ನೀಡುವುದು.
9. ಪ್ರೌಢ ಶಾಲಾ ಸಹ
ಶಿಕ್ಷಕರಿಗೆ ಕಾಲಮಿತಿ ಬಡ್ತಿ ನೀಡುವಾಗ
ಪದನಾಮೀಕರಿಸಿ ಆರ್ಥಿಕ ಸೌಲಭ್ಯ ನೀಡುವುದು
(10 ವರ್ಷ ಮೇಲ್ಪಟ್ಟ ಸಹ ಶಿಕ್ಷಕರುಗಳಿಗೆ-ಹಿರಿಯ ಸಹ ಶಿಕ್ಷಕರು
ಎಂದು ಪದನಾಮೀಕರಿಸುವುದು)
10. ಸಹಶಿಕ್ಷಕರಿಗೆ ಬಡ್ತಿ ನೀಡುವ ಸಂದರ್ಭದಲ್ಲಿ
ಮು.ಶಿ. ವಿಷಯ
ಪರೀವೀಕ್ಷಕರು, ಉಪ ಪ್ರಾಂಶುಪಾಲರು
ಇತ್ಯಾದಿ ಹುದ್ದೆಗಳಲ್ಲಿ ಅವಕಾಶ ನೀಡುವುದು.
11. ಪ್ರೌಢಶಾಲಾ ಶಿಕ್ಷಕ ಮತ್ತು
ವಿದ್ಯಾರ್ಥಿಗಳ ಅನುಪಾತವನ್ನು 40:1ರಂತೆ ನಿಗದಿಗೊಳಿಸುವುದು.
12. ಪ್ರತಿ ಉಪನಿರ್ದೇಶಕರ ಕಛೇರಿಯಲ್ಲಿ
ಎಲ್ಲಾ ವಿಷಯದ ವಿಷಯ ಪರಿವೀಕ್ಷಕರಿದ್ದು,
ಹಿಂದಿ ಭಾಷಾ ವಿಷಯ ಪರಿವೀಕ್ಷಕರ
ಹುದ್ದೆ ಇಲ್ಲದಿರುವುದರಿಂದ ಹಿಂದಿ ವಿಷಯ ಪರಿವೀಕ್ಷಕರ
ಹುದ್ದೆಯನ್ನು ಸೃಜಿಸುವುದು ಮತ್ತು ಈ ಹುದ್ದೆಗಳಿಗೆ
ಪ್ರೌಢಶಾಲೆಗಳ ಹಿಂದಿ ಸಹ ಶಿಕ್ಷಕರನ್ನೇ
ಪರಿಗಣಿಸುವುದು.
13. ಸಾರ್ವಜನಿಕ ಶಿಕ್ಷಣ ಇಲಾಖೆಯ
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ನ್ಯೂನತೆಗಳಿದ್ದು, ಸರಿಪಡಿಸಿ
ಸ್ಪಷ್ಟ ವರ್ಗಾವಣೆ ಕಾಯ್ದೆಯನ್ನು ಜಾರಿಗೊಳಿಸುವುದು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಹಾಗೂ ಕೇಂದ್ರ ಸಂಘದ ಪಧಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಭಾಗವಹಿಸಿ ಮೇಲ್ಕಂಡ ಬೇಡಿಕೆಗಳ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.



Comments
Post a Comment