ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಕೆ ನಿಯಮ ಏನು ? ನಾನು ಸರ್ಕಾರಿ ನೌಕರನಾಗಿದ್ದು , ಕಳೆದೊಂದು ವರ್ಷದಿಂದ ಅಶಿಸ್ತಿನ ಕ್ರಮವಾಗಿ ಶಿಸ್ತು ಪ್ರಾಧಿಕಾರಿಯವರು ನನ್ನನ್ನು ಅಮಾನತ್ತಿನಲ್ಲಿಟ್ಟಿದ್ದಾರೆ . ಆದರೆ , ನಾನು 20 ವರ್ಷ ಸೇವೆ ಪೂರೈಸಿರುವುದರಿಂದ ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಸಲು ಬಯಸಿದ್ದೇನೆ . ನನ್ನ ಈ ಅಮಾನತ್ತಿನ ಅವಧಿಯನ್ನು ಏನೆಂದು ಪರಿಗಣಿಸಲಾಗುತ್ತದೆ ? - ಬಾಲಾಜಿ ರಾವ್ ಬೆಳಗಾವಿ . ಸರ್ವೋಚ್ಚ ನ್ಯಾಯಾಲಯವು ಆರ್.ಎಸ್ . ನಾಯಕ್ ವಿರುದ್ಧ ಕರ್ನಾಟಕ ರಾಜ್ಯ 1982 ( 1 ) ರ ಪ್ರಕರಣದಲ್ಲಿ ಅಮಾನತ್ತಿನಲ್ಲಿರುವ ಸರ್ಕಾರಿ ನೌಕರ ಸ್ವಇಚ್ಛಾ ನಿವೃತ್ತಿ ಕೋರಿದಾಗ ಅದನ್ನು ಅಂಗೀಕರಿಸಿ , ಶಿಸ್ತು ಕ್ರಮ ಕೈಬಿಟ್ಟರೆ ಆಗ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಲು ಸೂಚಿಸಲಾಗಿರುತ್ತದೆ . ಹಾಗಾಗಿ ನೀವು ಸ್ವಇಚ್ಛಾ ನಿವೃತ್ತಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 ( 1 ) ರ ಮೇರೆಗೆ 3 ತಿಂಗಳ ಮುಂಚೆಯೇ ಕೋರಿಕೆ ಸಲ್ಲಿಸಬಹುದು . ನಿಮ್ಮ ಕೋರಿಕೆ ಅಂಗೀಕರಿಸಿದರೆ ನಿಮ್ಮ ಅಮಾನತ್ತಿನ ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಿ ನಿವೃತ್ತಿ ವೇತನ ಸೌಲಭ್ಯ ನೀಡಬಹುದು . ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ' ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ' ಪುಸ್ತಕ ನೋಡಬಹುದು . ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ...
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025 ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE ಚಾನಲ್ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು. ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...