Skip to main content

Posts

Showing posts from October, 2020

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ ರಾಜ್ಯ ಸರ್ಕಾರಿ‌ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ಶೀಘ್ರದಲ್ಲೇ ಜಾರಿ.

ನಗದುರಹಿತ ಚಿಕಿತ್ಸೆ - ನೌಕರರ ಸ್ನೇಹಿ ಆರೋಗ್ಯ ಯೋಜನೆ ರಾಜ್ಯ ಸರ್ಕಾರಿ‌ ನೌಕರರ ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ಶೀಘ್ರದಲ್ಲೇ ಜಾರಿ. ಪ್ರಸ್ತುತ ಜಾರಿಯಲ್ಲಿರುವ  "ಆರೋಗ್ಯ ಸಂಜೀವಿನಿ"  ಆರೋಗ್ಯ ಯೋಜನೆಯು ರಾಜ್ಯದ ಸರ್ಕಾರಿ ನೌಕರರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಇರುವುದಿಲ್ಲ. ಇದನ್ನು ಮನಗಂಡ ಸಂಘವು ಈ ಆರೋಗ್ಯ ಯೋಜನಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಒಂದು ಹೊಸ ಪ್ರಯೋಜನಕಾರಿ ಯೋಜನೆಯನ್ನು‌ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು. ನಗದು ರಹಿತ  ಆರೋಗ್ಯ ಚಿಕಿತ್ಸೆ ಯೋಜನೆಯ ಮುಖ್ಯಾಂಶಗಳು ಒಳರೋಗಿ - ಹೊರರೋಗಿ ಚಿಕಿತ್ಸಾ ವೆಚ್ಚ ಸಂಪೂರ್ಣ ನಗದುರಹಿತ. ಎಲ್ಲಾ ವಿಧದ ಮೆಡಿಕಲ್ ಇಮೇಜಿಂಗ್ (ಸ್ಕ್ಯಾನಿಂಗ್), ಲ್ಯಾಬೋರೇಟರಿ ಪರೀಕ್ಷೆಗಳು ಒಳಗೊಂಡಂತೆ ಔಷಧಿಗಳು ಸಹ ಈ ಯೋಜನೆ ಅಡಿ ಉಚಿತವಾಗಿ ಲಭ್ಯವಾಗಲಿದೆ. ಈ ಯೋಜನೆಯಡಿಯಲ್ಲಿ Organ Transplantation ಗೂ ಸಹ ಅವಕಾಶ ಕಲ್ಪಿಸಲಾಗಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸೇವೆಗೂ ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆ ಜಾರಿಯಿಂದಾಗಿ ನಮ್ಮ ರಾಜ್ಯವು ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ ನೌಕರರಿಗೆ ಇಂತಹ ವಿಶಿಷ್ಟವಾದ ನಗದುರಹಿತ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮನವಿಗೆ ಸ್ಪಂದಿಸಿರುವ‌ ಸರ್ಕಾರವು  ಎಲ್ಲಾ ಶಸ್ತ್ರ ಚಿಕಿತ್ಸೆ ಹಾಗೂ ಕಾಯಿಲೆಗಳಿಗೆ ನಗದುರಹ...

ಕೇಂದ್ರ ಸರ್ಕಾರಿ ನೌಕರರಿಗೆ ಶೇ.4% ರಷ್ಟು ತುಟ್ಟಿ ಭತ್ಯೆ (ಡಿ.ಎ) ಹೆಚ್ಚಳ- ವದಂತಿ.

 ಕೇಂದ್ರ ಸರ್ಕಾರಿ ನೌಕರರಿಗೆ ಶೇ.4% ರಷ್ಟು ತುಟ್ಟಿ ಭತ್ಯೆ (ಡಿ.ಎ) ಹೆಚ್ಚಳ- ವದಂತಿ. ಕೇಂದ್ರ ಸರ್ಕಾರಿ ನೌಕರರಿಗೆ ಶೇ .4% ರಷ್ಟು ತುಟ್ಟಿ ಭತ್ಯೆ ( ಡಿ . ಎ ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ದಿನಾಂಕ : 13/03/2020 ರಂದು ಅನುಮೋದನೆ ನೀಡಿರುತ್ತದೆ . ಆದರೆ ಕೇಂದ್ರ ಸರ್ಕಾರವು ದೇಶದ್ಯಂತ ಲಾಕ್ ಡೌನ್ ಘೋಷಿಸಿದ ನಂತರದ ದಿನದಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿರುವುದಿಲ್ಲ . ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕೇಂದ್ರ ಸಚಿವರ ಕೇಂದ್ರ ಸರ್ಕಾರಿ ನೌಕರರಿಗೆ ಶೇ .4% ರಷ್ಟು ತುಟ್ಟಿ ಭತ್ಯೆ ( ಡಿ . ಎ ) ಹೆಚ್ಚಳ   ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿರುವ ವಿಡಿಯೋ ಖಾಸಗಿ ವಾಹಿನಿ ( ಹಿಂದುಸ್ತಾನ ಟೈಮ್ಸ್ ) ನಿಂದ ದಿನಾಂಕ : 13-03-2020 ರಂದು   ಪ್ರಕಟಿಸಲಾಗಿದೆ .  >   Press Meet Video ಪ್ರಸ್ತುತ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ತುಟ್ಟಿ ಭತ್ಯೆಯನ್ನು ನೀಡುವ ಆದೇಶ ಅಥವಾ ಸಚಿವ ಸಂಪುಟ ಅನುಮೋದನೆಯನ್ನು ನೀಡಿರುವ ಬಗ್ಗೆ ಧೃಡ ಮಾಹಿತಿಯು ಇರುವುದಿಲ್ಲ .   ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeaba...

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತರೊಂದಿಗೆ ರಾಜ್ಯಾಧ್ಯಕ್ಷರು ನೇತೃತ್ವದ ಪದಾಧಿಕಾರಿಗಳ ನಿಯೋಗವು ವಿಶೇಷ ಸಭೆ‌‌ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೌಕರರ ಗಮನಕ್ಕೆ ರಾಜ್ಯಾಧ್ಯಕ್ಷರು ನೇತೃತ್ವದ ಪದಾಧಿಕಾರಿಗಳ ನಿಯೋಗವು ಆಯುಕ್ತರನ್ನು ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಥಮ ವೇತನ ಪ್ರಮಾಣ ಪತ್ರ, ಕಾಲಮಿತಿ ವೇತನ ಬಡ್ತಿ, ಪರೀಕ್ಷಾರ್ಥ ಅವಧಿ- ಇತರೆ  ಸೇವಾ ಸೌಲಭ್ಯಗಳ ಮಂಜೂರಾತಿಯಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ‌ಚರ್ಚಿಸಲಾಯಿತು. ಇನ್ನೂ ಮುಂದೆ ಪ್ರತಿ ವಾರ ಸಭೆ ಆಯೋಜನೆ ಮಾಡುವ ಮೂಲಕ ಎಲ್ಲಾ ಸೇವಾ ಸವಲತ್ತುಗಳನ್ನು ನಿಗದಿತ ಅವಧಿಯಲ್ಲಿ ಮಂಜೂರು ಮಾಡಲು ನಿರ್ಣಯಿಸಲಾಯಿತು.  ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

ಶಿಕ್ಷಕರ ವರ್ಗಾವಣೆ ಪ್ರಾರಂಭ - ರಾಜ್ಯ ಶಾಲಾ-ಕಾಲೇಜು ಶಿಕ್ಷಕರಿಗೆ ಸಿಹಿ ಸುದ್ದಿಕೊಟ್ಟ ಸಿಎಂ

ಶಿಕ್ಷಕರ ವರ್ಗಾವಣೆ ಪ್ರಾರಂಭ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ವೇಳಾಪಟ್ಟಿ ಕಡತವನ್ನು ಮಾನ್ಯ ಆಯುಕ್ತರರವರು ಮಾನ್ಯ ಶಿಕ್ಷಣ ಸಚಿವರಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದ್ದು,  ನವೆಂಬರ್ 05 ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ರವರು ತಿಳಿಸಿದ್ದಾರೆ.   ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

ಸೇವಾ ಸೌಲಭ್ಯಗಳ ಮಾಹಿತಿಗಳನ್ನು ಮೊಬೈಲ್ ಪೋನ್‍ನಲ್ಲಿ ಪಡೆಯಲು ನೊಂದಣಿ ಅರ್ಜಿ

 ಸೇವಾ ಸೌಲಭ್ಯಗಳ ಮಾಹಿತಿಗಳನ್ನು ಮೊಬೈಲ್ ಪೋನ್‍ನಲ್ಲಿ ಪಡೆಯಲು ನೊಂದಣಿ ಅರ್ಜಿ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಿ ನೌಕರರಿಗೆ ಹಲವು ವಿಷಯಗಳನ್ನು ತಲುಪಿಸಲು ನಾವು ಪ್ರಯತ್ನಿಸುತ್ತಿದ್ದು, ಆದರೆ ಸಂಘದ ಸಂಘಟನೆ ಹಾಗೂ ನೌಕರರ ನಡುವೆ ನೇರ ಸಂವಹನೆಯ ಅಂತರವಿರುವ ಕಾರಣ ಹಲವಾರು ವಿಷಯ ಹಾಗೂ ಮಾಹಿತಿಗಳು ಸರಿಯಾಗಿ ನೌಕರರಿಗೆ ತಲುಪಲು ಸಾಧ್ಯವಾಗುತ್ತಿಲ್ಲ.  ಆದರೆ ತಾವುಗಳು ಈ ಸಂವಹನೆಯ ಅಂತರ ಇಲ್ಲದೇ ನೇರವಾಗಿ ನಮ್ಮ ಜೊತೆಗೂಡಿ ಸುಲಭ ನೊಂದಣಿ ಮಾಡಿಕೊಳ್ಳುವ ಮೂಲಕ ನೇರವಾಗಿ ತಮ್ಮ ಮೊಬೈಲ್ ಪೋನ್‍ನಲ್ಲಿ SMS/Blog/Facebook/Youtube/Twitterಗಳ ಮೂಲಕ ಎಲ್ಲಾ ಸೇವಾ ಸೌಲಭ್ಯಗಳ ಮಾಹಿತಿಗಳನ್ನು ಪಡೆಯಿರಿ. ➡  ನೊಂದಣಿ ಅರ್ಜಿ  ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿದ ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಸ್ಥಳ ಆಯ್ಕೆಗೆ ಕೌನ್ಸಲಿಂಗ್

ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿದ ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಸ್ಥಳ ಆಯ್ಕೆಗೆ ಕೌನ್ಸಲಿಂಗ್. ಮೈಸೂರು ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕರು ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿರುವ ಸಹಶಿಕ್ಷಕರಿಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಕೌನ್ಸಲಿಂಗ್ ದಿನಾಂಕವನ್ನು ನಿಗದಿಪಡಿಸಲಾಗಿದೆ. ದಿನಾಂಕ : 21-10-2020,  22-10-2020 & 23-10-2020.  ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

ನೌಕರರ ಸೇವಾ ಸೌಲಭ್ಯಗಳು ಇನ್ನೂ ಮೊಬೈಲ್ ಫೋನ್ ನಲ್ಲಿ ಆನ್ ಲೈನ್ ಮೂಲಕ ಲಭ್ಯ. - "ವಿಶೇಷ ಅತಿಥಿ " ಸಂದರ್ಶನ

 "ವಿಶೇಷ ಅತಿಥಿ " ಸಂದರ್ಶನ ರಾಜ್ಯ ಸರ್ಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಆಕಾಶವಾಣಿ, ಭದ್ರಾವತಿ ಯಲ್ಲಿ ಆಯೋಜಿಸಲಾಗಿದ್ದ  "ವಿಶೇಷ ಅತಿಥಿ " ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ನೌಕರರಿಗೆ ಲಭ್ಯವಾಗಬೇಕಾದ ಸೇವಾ ಸೌಲಭ್ಯಗಳನ್ನು ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧುನಿಕ ‌ತಂತ್ರಜ್ಞಾನವನ್ನು ಬಳಸಿಕೊಂಡು    ಮುಂದಿನ ದಿನಗಳಲ್ಲಿ ಎಲ್ಲಾ ಸೌಲಭ್ಯಗಳು ನೌಕರರು ತಮ್ಮ  ಮೊಬೈಲ್ ಫೋನ್ ನಲ್ಲಿ ಆನ್ ಲೈನ್  ಮೂಲಕ ಪಡೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹಲವು ಸಭೆಗಳನ್ನು ಏರ್ಪಡಿಸಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆ ಮಾಡುವ ಬಗ್ಗೆ ತಮ್ಮ   ಸಂದರ್ಶನದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಸುದರ್ಶನ್, ಪ್ರೋಗ್ರಾಂ ಎಕ್ಸಿಕ್ಯುಟಿವ್ ಮತ್ತು ಶ್ರೀ ಚಂದ್ರ ಹಾಸನ್, ವರದಿಗಾರರು ಉಪಸ್ಥಿತರಿದ್ದರು.  ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSG...

Update ಆಗಲಿದೆ HRMS. ‌ದೇಶದಲ್ಲಿಯೇ ಪ್ರಥಮವಾಗಿ ಹೈಟೆಕ್ ಮಾದರಿಯಲ್ಲಿ ಬರಲಿದೆ HRMS 2.0

ದೇಶದಲ್ಲಿಯೇ ಪ್ರಥಮವಾಗಿ ಹೈಟೆಕ್ ಮಾದರಿಯಲ್ಲಿ ಬರಲಿದೆ HRMS 2.0 ನೌಕರರ ಸೇವಾ ಸೌಲಭ್ಯಗಳನ್ನು ಅನ್ ಲೈನ್ ಮೂಲಕ ತ್ವರಿತಗತಿಯಲ್ಲಿ ಒದಗಿಸುವ ಸಲುವಾಗಿ ‌ದೇಶದಲ್ಲಿಯೇ ಪ್ರಥಮವಾಗಿ ಹೈಟೆಕ್ ಮಾದರಿಯಲ್ಲಿ ಸಾಫ್ಟ್‌ವೇರ್ ಸಿದ್ದಪಡಿಸುವ ಸಂಬಂಧ ಆರ್ಥಿಕ ಇಲಾಖೆಯ ವೆಚ್ಚ ವಿಭಾಗದ ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್, ಭಾ.ಆ.ಸೇ., ಯೋಜನಾ ನಿರ್ದೇಶಕರು ಶ್ರೀಮತಿ ದೀಪ್ತಿ ಎಂ ಕಾನಡೆ, ಭಾ.ಆ.ಸೇ., ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ ರವರು ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರೊಂದಿಗೆ ಆನ್ ಲೈನ್ ಸಭೆ ಮೂಲಕ ಚರ್ಚಿಸಲಾಯಿತು. ಸೇವಾ ಜೇಷ್ಠಾತೆ ಹಾಗೂ ಮುಂಬಡ್ತಿಗಳು, ಪರೀಕ್ಷಾತ್ಹ ಅವಧಿ ಫೋಷಣೆ / ಕಾಲಮಿತಿ / ಸ್ವಯಂ ಚಾಲಿತ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿ.  ಕೆ.ಜಿ.ಐ.ಡಿ.ಸಾಲ,  ಜಿ.ಪಿ.ಎಫ್. ಮುಂಗಡ ಹಾಗೂ ಭಾಗಶಃ ವಾಪಾಸಾತಿ,  ಸಾಮಾಜಿಕ ವಿಮಾ ಯೋಜನೆ,  ಪತ್ರಾಂಕಿತ ಅಧಿಕಾರಿಗಳಿಗೆ ಎನ್.ಓ.ಸಿ.,  ವೈದ್ಯಕೀಯ ವೆಚ್ಚ ಮರುಪಾವತಿಗಳು,  ನಿವೃತ್ತಿ ವೇತನ, ಕುಟುಂಬ ಪಿಂಚಣಿ,  ನಿಯಮ 247-ಎ ಮತ್ತು 252-ಬಿ ಅಡಿಯಲ್ಲಿ ಅರ್ಹತಾದಾಯಕ ಸೇವೆ,  ಅಂತಿಮ ವೇತನ‌ ಪ್ರಮಾಣ ಪತ್ರ,  ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎನ್.ಓ.ಸಿ.,  ಪಾಸ್ ಪೋರ್ಟ್ ನವೀಕರಣಕ್ಕೆ ಅನುಮತಿ,  ಎಲ್ಲಾ ರೀತಿಯ ರಜೆ ಮಂಜೂರಾತಿ,  ಹಬ್ಬದ ಮುಂಗಡ, ಇತ್ಯಾದಿ.... ಮೇಲ್ಕಂ...

"ಸರ್ಕಾರಿ ನೌಕರರ ಕಾರ್ಯ ಶ್ಲಾಘನೀಯ: ಬೀಳಗಿ"

ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ ಹಾಗೂ " ಸಾಥನಾ ಪಥ" ಸಾರ್ಥಕ ಮೊದಲ ಹೆಜ್ಜೆ (2019-2020) ಪುಸ್ತಕ ಬಿಡುಗಡೆ ಕಾರ್ಯಕ್ರಮದ‌ ಸುದ್ದಿ ಪತ್ರಿಕೆಗಳಲ್ಲಿ ಕಂಡಂತೆ. ದಾವಣಗೆರೆ ನಗರದಲ್ಲಿ ದಿನಾಂಕ 11-10-2020 ರಂದು‌ ನಡೆದ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ ಹಾಗೂ " ಸಾಥನಾ ಪಥ" ಸಾರ್ಥಕ ಮೊದಲ ಹೆಜ್ಜೆ (2019-2020) ಪುಸ್ತಕ ಬಿಡುಗಡೆ  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಭಾಗವಹಿಸಿ ಉದ್ಘಾಟನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆಗೊಳಿಸಿ " ಸರ್ಕಾರಿ ನೌಕರರ ಕಾರ್ಯ ಶ್ಲಾಘನೀಯ " ಎಂದು ತಮ್ಮ ಅತಿಥಿಗಳ ಭಾಷಣದಲ್ಲಿ ಸಭೆಗೆ ತಿಳಿಸಿದರು.  ಹೆ ಚ್ಚಿ ನ   ಮಾಹಿತಿಗಾಗಿ  ಸಂಪರ್ಕಿಸಿ Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

"ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ & ಸಂಘದ "ಸಾಥನಾ ಪಥ" ಪುಸ್ತಕ ಬಿಡುಗಡೆ- ದಾವಣಗೆರೆ."

"ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ &  ಸಂಘದ "ಸಾಥನಾ ಪಥ" ಪುಸ್ತಕ ಬಿಡುಗಡೆ- ದಾವಣಗೆರೆ." ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ ಹಾಗೂ " ಸಾಥನಾ ಪಥ" ಸಾರ್ಥಕ ಮೊದಲ ಹೆಜ್ಜೆ (2019-2020) ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಭಾಗವಹಿಸಿ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. " ಸಾಧನಾ ಪಥ"  ಸಾರ್ಥಕ ಮೊದಲ ಹೆಜ್ಜೆ (2019-2020) ಪುಸ್ತಕ ಬಿಡುಗಡೆ. ಸರ್ವ ಸದಸ್ಯರ ವಿಶೇಷ ಮಹಾ ಸಭೆಯಲ್ಲಿ ಅಧ್ಯಕ್ಷರ‌ ಭಾಷಣ. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್  ಹಾಗೂ ಸಾನಿಟೈಜರ್ ಬಳಸಿ ಸಭೆಯಲ್ಲಿ ಭಾಗವಹಿಸಿದ್ದರು ಎಲ್ಲಾ ಸದಸ್ಯರು. ಹೆಚ್ಚಿನ   ಮಾಹಿತಿಗಾಗಿ  ಸಂಪರ್ಕಿಸಿ: Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

"ಹೆಚ್.ಆರ್.ಎಂ.ಎಸ್. ನಿರ್ವಹಣೆ ಇನ್ನಷ್ಟು ಸುಲಭ "

"ಹೆಚ್.ಆರ್.ಎಂ.ಎಸ್. ನಿರ್ವಹಣೆ ಇನ್ನಷ್ಟು ಸುಲಭ "           ಸಂಘದ ಮನವಿಯಂತೆ ಹೆಚ್.ಆರ್.ಎಂ.ಎಸ್. ನಿರ್ವಹಣೆಯ ತಂತ್ರಾಂಶದ ಸುಧಾರಣೆಗಾಗಿ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಇ-ಆಡಳಿತ ಇವರು ನಡೆಸಿದ ಸಭೆಯಲ್ಲಿ ತಂತ್ರಾಂಶದಲ್ಲಿ ಗೊಂದಲಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತøತ ಚರ್ಚೆ ನಡೆಸಲಾಯಿತು. ಅದರಂತೆ ಜಿಲ್ಲಾಮಟ್ಟದ ಸಂಪರ್ಕ ಅಧಿಕಾರಿಗಳನ್ನು ನೇಮಿಸುವ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗಿದೆ. ಈ ತಂತ್ರಾಂಶದಲ್ಲಿನ ನ್ಯೂನತೆಗಳನ್ನು ಸ್ಥಳೀಯವಾಗಿ ಸರಿಪಡಿಸಲು ಅನುಕೂಲವಾಗುವಂತೆ ಕೆಲವೊಂದು ಷರತ್ತುಗಳೊಂದಿಗೆ ಆಯಾ ಡಿಡಿಓ ಗಳಿಗೆ ಅಧಿಕಾರ ನೀಡುವಂತೆ ಇ-ಆಡಳಿತ ಇಲಾಖೆಗೆ ಸಂಘವು ಮನವಿ ಮಾಡಿರುತ್ತದೆ. ಈ ಕುರಿತಂತೆ ಇ-ಆಡಳಿತ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಆದೇಶ ಹೊರಡಿಸುವ ಕ್ರಮ ಕೈಗೊಂಡಿರುತ್ತದೆ.  ಹೆಚ್ಚಿನ   ಮಾಹಿತಿಗಾಗಿ  ಸಂಪರ್ಕಿಸಿ: Facebook           Telegram:t.me/ksgeabangalore,       Blogspot .      Website .     WhatsApp         Youtube   @syedKSGEA

"ಹೊಸ ರೂಪದಲ್ಲಿ HRMS-2 ತಂತ್ರಾಂಶ. ಸರ್ಕಾರಿ ನೌಕರರ ಸೇವಾ ಸೌಲಭ್ಯಗಳನ್ನು ಇನ್ನೂ ತ್ವರಿತಗತಿ ಅನ್ ಲೈನ್ ಮೂಲಕವೇ ದೊರೆಯುತ್ತವೆ."

ಸರ್ಕಾರಿ ನೌಕರರಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಹೆಚ್.ಆರ್.ಎಂ.ಎಸ್. - 2 ತಂತ್ರಾಂಶದಲ್ಲಿ ಅಳವಡಿಸುವಂತೆ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಗೆ  ಮನವಿ ಮಾಡಲಾಗಿದೆ. ಹೆಚ್.ಆರ್.ಎಂ.ಎಸ್.-2 ತಂತ್ರಾಂಶದಲ್ಲಿ ಸೇರ್ಪಡೆಗೊಳ್ಳಲಿರುವ ಸೇವೆಗಳು. ಸೇವಾ ಜೇಷ್ಠಾತೆ ಹಾಗೂ ಮುಂಬಡ್ತಿಗಳು, ಪರೀಕ್ಷಾತ್ಹ ಅವಧಿ ಫೋಷಣೆ / ಕಾಲಮಿತಿ / ಸ್ವಯಂ ಚಾಲಿತ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿ.  ಕೆ.ಜಿ.ಐ.ಡಿ.ಸಾಲ,  ಜಿ.ಪಿ.ಎಫ್. ಮುಂಗಡ ಹಾಗೂ ಭಾಗಶಃ ವಾಪಾಸಾತಿ,  ಸಾಮಾಜಿಕ ವಿಮಾ ಯೋಜನೆ,  ಪತ್ರಾಂಕಿತ ಅಧಿಕಾರಿಗಳಿಗೆ ಎನ್.ಓ.ಸಿ.,  ವೈದ್ಯಕೀಯ ವೆಚ್ಚ ಮರುಪಾವತಿಗಳು,  ನಿವೃತ್ತಿ ವೇತನ, ಕುಟುಂಬ ಪಿಂಚಣಿ,  ನಿಯಮ 247-ಎ ಮತ್ತು 252-ಬಿ ಅಡಿಯಲ್ಲಿ ಅರ್ಹತಾದಾಯಕ ಸೇವೆ,  ಅಂತಿಮ ವೇತನ‌ ಪ್ರಮಾಣ ಪತ್ರ,  ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎನ್.ಓ.ಸಿ.,  ಪಾಸ್ ಪೋರ್ಟ್ ನವೀಕರಣಕ್ಕೆ ಅನುಮತಿ,  ಎಲ್ಲಾ ರೀತಿಯ ರಜೆ ಮಂಜೂರಾತಿ,  ಹಬ್ಬದ ಮುಂಗಡ, ಇತ್ಯಾದಿ.... ಮೇಲ್ಕಂಡ ಸೇವಾ ಸೌಲಭ್ಯ ಮಾಹಿತಿಗಳನ್ನು ಹೆಚ್.ಆರ್.ಎಂ.ಎಸ್.-2 ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಇದರಿಂದಾಗಿ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ವಿಳಂಬವಿಲ್ಲದೆ ನಿಗದಿತ ಅವಧಿಯೊಳಗೆ ಪಡೆಯಲು ಅನುಕೂಲವಾಗಲಿದೆ. ಹೆಚ್ಚಿನ  ...

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers