Skip to main content

Posts

Showing posts from October, 2021

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಪ್ರಾಥಮಿಕ/ಪ್ರೌಢ/ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ವೃಂದದ ಮಾಹಿತಿ ಸಂಗ್ರಹಣೆ.

 ಕರ್ನಾಟಕ ರಾಜ್ಯ ಪ್ರಾಥಮಿಕ/ಪ್ರೌಢ/ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ವೃಂದದ ಮಾಹಿತಿ ಸಂಗ್ರಹಣೆ. ಮಾನ್ಯ ಪ್ರಾಥಮಿಕ / ಪ್ರೌಢ ಶಾಲಾ / ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ಬಂಧುಗಳೇ.... ಶಿಕ್ಷಣ ಇಲಾಖೆಯ ಬೋಧಕ ವೃಂದದ ಜ್ವಲಂತ ಸಮಸ್ಯೆಗಳಾದ ಸಿ&ಆರ್ ನಿಯಮ ತಿದ್ದುಪಡಿ ಪದವೀಧರ ಶಿಕ್ಷಕರ ಸಮಸ್ಯೆ  ಗ್ರಾಮಿಣ ಕೃಪಾಂಕ ಶಿಕ್ಷಕರ ಸಮಸ್ಯೆ ಬಡ್ತಿ ಪಡೆದು ಕಡಿಮೆ ವೇತನ ಪಡೆಯುತ್ತಿರುವ 10,15,20,25 ವರ್ಷಗಳ ಸಮಸ್ಯೆ ಶಿಕ್ಷಣ ಇಲಾಖೆಯ ಇನ್ನಿತರೆ ಸಮಸ್ಯೆಗಳು     ಮೇಲ್ಕಂಡ ಹಲವಾರು ವರ್ಷಗಳ ಸಮಸ್ಯೆಗೆ ಪರಿಹಾರ ಒದಗಿಸಲು  ಮಾನ್ಯ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ದಿನಾಂಕ: 08-11-2021 ರಂದು ನಡೆಯಲಿರುವ ಸಭೆಯಲ್ಲಿ ಕರಾರುವಕ್ಕಾಗಿ ಮೇಲಿನ ವಿಷಯಗಳ ಬಗ್ಗೆ ಪ್ರತಿಪಾದಿಸಲು  ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. (ಅಂತರ ಜಿಲ್ಲಾ ವರ್ಗಾವಣೆ ಬಯಸಿರುವ ಶಿಕ್ಷಕರ ಮಾಹಿತಿಯನ್ನು ಈಗಾಗಲೇ ಸಂಘದಿ0ದ ಸಂಗ್ರಹಿಸಲಾಗಿದೆ.) ಆದ್ದರಿAದ, ಶಿಕ್ಷಣ ಇಲಾಖೆಯ ಬೋಧಕ ವೃಂದದ ಬಂಧುಗಳು ಈ ಕೆಳಕಂಡ ಲಿಂಕ್‌ಅನ್ನು ಬಳಸಿ Online  ಮೂಲಕ ದಿ:05-11-2021 ರೊಳಗಾಗಿ ಅಗತ್ಯ ಮಾಹಿತಿಗಳನ್ನು ಸಂಬ0ಧಿಸಿದವರು ಕಡ್ಡಾಯವಾಗಿ ಸಲ್ಲಿಸಲು ಕೋರಿದೆ.  https://bit.ly/teachersksgea ಆನ್‌ಲೈನ್ ಮಾಹಿತಿ ಸಲ್ಲಿಸಲು ಪ್ರಾರಂಭ  ದಿನಾಂಕ : 30-10-2021 ರಿಂದ  ದ...

ಶಿಕ್ಷಣ ಇಲಾಖೆಯ ಮಹಿಳಾ ನೌಕರರ ಆದ್ಯ ಗಮನಕ್ಕೆ...

 ಶಿಕ್ಷಣ ಇಲಾಖೆಯ ಶಿಶುಪಾಲನೆ ರಜೆ ಮಂಜೂರಾತಿ ಬಗ್ಗೆ ಸ್ಪಷ್ಟೀಕರಣ  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕಿಯರಿಗೆ ಶಿಶುಪಾಲನೆ ರಜೆ ಮಂಜೂರಾತಿ ಸಂಬAಧ ಶಿಕ್ಷಣ ಇಲಾಖೆಯಿಂದ ಆರ್ಥಿಕ ಇಲಾಖೆಯ ಸ್ಪಷ್ಟೀಕರಣ ಕೋರಲಾಗಿತ್ತು.  ಇಂದು ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಆರ್ಥಿಕ ಇಲಾಖೆಯು ಒಂದೆರಡು ದಿನಗಳಲ್ಲಿ ಸ್ಪಷ್ಟೀಕರಣ ನೀಡಲಿದ್ದು, ಸದ್ಯದಲ್ಲೇ ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ನಿರ್ದೇಶನ ಹೊರಬೀಳಲಿದೆ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅಮಿತಾ ಪ್ರಸಾದ್ ಭಾ.ಆ.ಸೇ. ಇವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಸರ್ಕಾರಿ ನೌಕರರ ಆಡಳಿತಾತ್ಮಕ ವಿಷಯಗಳ ಬಗ್ಗೆ ಕೈಗೊಂಡ ನಿರ್ಣಯಗಳು .

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅಮಿತಾ ಪ್ರಸಾದ್ ಭಾ.ಆ.ಸೇ. ಇವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಸರ್ಕಾರಿ ನೌಕರರ ಆಡಳಿತಾತ್ಮಕ ವಿಷಯಗಳ ಬಗ್ಗೆ ಕೈಗೊಂಡ ನಿರ್ಣಯಗಳು .         ದಿನಾಂಕ : 28-10-2021 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅಮಿತಾ ಪ್ರಸಾದ್ ಭಾ.ಆ.ಸೇ ಅಧ್ಯಕ್ಷತೆಯಲ್ಲಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಮನೀಶ್ ಮಲ್ ಭಾ.ಆ.ಸೇ. , ಇವರ ಉಪಸ್ಥಿತಿಯಲ್ಲಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್ . ಷಡಾಕ್ಷರಿಯವರು ಹಾಗೂ ವಿವಿಧ ಇಲಾಖೆಯ ಸದಸ್ಯರೊಂದಿಗೆ ರಾಜ್ಯದ ಸರ್ಕಾರಿ ನೌಕರರ ಹಲವಾರು ಬೇಡಿಕೆಗಳ ಬಗ್ಗೆ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು .       ಸಭೆಯು ಈ ಕೆಳಕಂಡ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯಿಸಿದ ನಂತರ ಸೂಕ್ತ ಆದೇಶಗಳನ್ನು ಹೊರಡಿಸಲು ಸಮಿತಿಯ ಅಧ್ಯಕ್ಷರು ಸಂಬಂಧಿಸಿದವರಿಗೆ ಸೂಚನೆ ನೀಡಿದರು . ಎಲ್ಲಾ ಇಲಾಖೆಗಳಲ್ಲಿ ಪ್ರತಿ ವರ್ಷ ಮೊದಲ ತಿಂಗಳಿನಲ್ಲಿ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಮುಂಬಡ್ತಿ ಕೋಟಾದ ಹುದ್ದೆಗಳನ್ನು ಗುರುತಿಸಿ ಪದೋನ್ನತಿ ನೀಡಲು ತೀರ್ಮಾನಿಸಲಾಯಿತು .  ಎಲ್ಲಾ ಇಲಾಖೆಗಳಲ್ಲ...

ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ: 22, 23 ಹಾಗೂ 24ನೇ ಅಕ್ಟೋಬರ್ 2021ರಂದು ನಡೆದ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಫಲಿತಾಂಶ ಪಟ್ಟಿ.

ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ: 22, 23 ಹಾಗೂ 24ನೇ ಅಕ್ಟೋಬರ್ 2021ರಂದು ನಡೆದ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ  ಫಲಿತಾಂಶ ಪಟ್ಟಿ. ಪಿ.ಡಿ.ಎಫ್. ಫೈಲ್ ಗಾಗಿ ಇಲ್ಲಿ‌ ಕ್ಲಿಕ್ ಮಾಡಿ.  ⬇ https://bit.ly/sportsresults2021 ಸಂಗೀತ ರಸ ಸಂಜೆ ಹಾಗೂ ಮನೋರಂಜನಾ ಕಾರ್ಯಕ್ರಮದ ವಿಡಿಯೋಗಳು KSGEA NEWS ಯುಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಆದ್ಯ ಗಮನಕ್ಕೆ

 ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಆದ್ಯ ಗಮನಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ: 22, 23 ಹಾಗೂ 24ನೇ ಅಕ್ಟೋಬರ್ 2021ರಂದು ನಡೆದ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಐತಿಹಾಸಿಕ ಕ್ಷಣಗಳು ತಮ್ಮ ಮುಂದೆ ಈ ಕೆಳಕಂಡ  ವೆಬ್‌ಸೈಟ್‌ನಲ್ಲಿ ಲಭ್ಯವಿದೆ. https://bit.ly/sportsphotos2021 ಸಂಗೀತ ರಸ ಸಂಜೆ ಹಾಗೂ ಮನೋರಂಜನಾ ಕಾರ್ಯಕ್ರಮದ ವಿಡಿಯೋಗಳು KSGEA NEWS ಯುಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿ : 01 / 07 / 2021 ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆಗೊಳಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ. - ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿ : 01 / 07 / 2021 ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆಗೊಳಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ. - ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು ಸೂಚಿತ ವಿಷಯದನ್ವಯ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಕರ್ನಾಟಕ ರಾಜ್ಯ ಸರ್ಕಾರವು ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವುದು ಸಂಪ್ರದಾಯವಾಗಿರುತ್ತದೆ .  ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಉಲ್ಲೇಖಿತ ಆದೇಶದಲ್ಲಿ ದಿನಾಂಕ 01/07/2021 ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ . 3 % ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ .  ಅದ್ದರಿಂದ ತಾವುಗಳು ದಯಮಾಡಿ ಕೇಂದ್ರ ಸರ್ಕಾರದ ಆದೇಶ ಸಂ : 1 / 4 / 2021 - ಇ -2 ( ಬಿ ) , ದಿನಾಂಕ : 25-10-2021ರಂತೆ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ದಿನಾಂಕ 01/07/2021 ರಿಂದ ಪೂರ್ವಾನ್ವಯವಾಗುವಂತೆ ಶೇ . 3 % ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಲು , ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಲು  ರಾಜ್ಯಾಧ್ಯಕ್ಷರಾದ   ಸಿ.ಎಸ್ ಪಡಾಕ್ಷರಿರವರು  ಮಾನ್ಯ ಮುಖ್ಯಮಂತ್ರಿಗಳಿಗೆ ಕೋರಿದರು.

ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು Online ಮೂಲಕ ನೋಂದಣಿ ಮಾಡಿಕೊಂಡಿರುವ ಕ್ರೀಡಾಪಟುಗಳ ಪಟ್ಟಿ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು Online ಮೂಲಕ ನೋಂದಣಿ ಮಾಡಿಕೊಂಡಿರುವ ತಮ್ಮ ಜಿಲ್ಲೆಯ ಕ್ರೀಡಾಪಟುಗಳ ಪಟ್ಟಿಯನ್ನು ಜಿಲ್ಲಾ / ತಾಲ್ಲೂಕು ಶಾಖೆಯ ಅಧ್ಯಕ್ಷರಿಗೆ ಕಳುಹಿಸಿದೆ . ಈ ಕೆಳಕಂಡ ಮಾಹಿತಿಯನ್ನು ಆಯ್ಕೆಯಾಗಿರುವ ಕ್ರೀಡಾಪಟುಗಳ ಗಮನಕ್ಕೆ ತರಲು ಕೋರಿದೆ .  - : ಕ್ರೀಡಾಪಟುಗಳ ಗಮನಕ್ಕೆ : - ಜಿಲ್ಲೆಯಿಂದ ಆಯ್ಕೆಯಾದ Online ಕ್ರೀಡಾಪಟುಗಳ ಪಟ್ಟಿ ಆಯಾ ಜಿಲ್ಲಾ / ತಾಲ್ಲೂಕು ಶಾಖೆಗಳ ಅಧ್ಯಕ್ಷರ ಬಳಿ ಲಭ್ಯವಿರುತ್ತದೆ .  ಸಂಬಂಧಿಸಿದ ಕ್ರೀಡಾಪಟುಗಳು ತಮ್ಮ ಕ್ರಮ ಸಂಖ್ಯೆಯನ್ನು ಜಿಲ್ಲಾ / ತಾಲ್ಲೂಕು ಅಧ್ಯಕ್ಷರಿಂದ ಪಡೆದುಕೊಳ್ಳುವುದು .  ಸದರಿ ಕ್ರಮ ಸಂಖ್ಯೆಯನ್ನು ನೋಂದಣಿ ಸಮಯದಲ್ಲಿ ನೋಂದಣಿ ಕೌಂಟರ್‌ನಲ್ಲಿ ತಿಳಿಸಿ , ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ತೋರಿಸಿ ನೋಂದಣಿ ಮಾಡಿಸಿಕೊಳ್ಳುವುದು .  ನೋಂದಣಿ ಕೌಂಟರ್‌ನಲ್ಲಿ ನೀಡುವ ಅಧಿಕೃತ Registration Card ನ್ನು ಪಡೆದು , ಟ್ರಾಕ್‌ಸೂಟ್ಸ್ , ಕ್ಯಾಪ್‌ಗಳನ್ನು ಪಡೆದುಕೊಳ್ಳುವುದು ಹಾಗೂ ಸದರಿ ಕಾರ್ಡ್‌ನ್ನು ಕ್ರೀಡೆ - ವಸತಿ , ಊಟ - ಉಪಹಾರಕ್ಕೆ ಬಳಸಿಕೊಳ್ಳತಕ್ಕದ್ದು . ದಿನಾಂಕ : 22-10-2021ರಂದು ಸಂಜೆ 04-00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಥ ಸಂಚಲನದಲ್ಲಿ ಟ್ರಾಕ್‌ಸೂಟ್ಸ್ ಮತ್ತು ಕ್ಯಾಪ್ ಧರಿಸಿ ಕಡ್ಡಾಯವಾಗಿ ಭಾಗವಹಿಸುವುದು .  Onl...

ನೇಮಕಾತಿ ನಿಯಮಾವಳಿ ರೀತ್ಯಾ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಎಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇದೆ ?

ನೇಮಕಾತಿ ನಿಯಮಾವಳಿ ರೀತ್ಯಾ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಎಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇದೆ ?  -   ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ಪ್ರಶ್ನೆ ಪ್ರಸ್ತುತ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕರ ಪ್ರಾದ್ಯಾಪಕರ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಈ ಅಧಿಸೂಚನೆ ಯಲ್ಲಿ ಸರ್ಕಾರಿ ನೌಕರರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ . ನೇಮಕಾತಿ ನಿಯಮಾವಳಿ ರೀತ್ಯಾ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಎಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇದೆ ? ಪ್ರಸ್ತುತ ಐದು ವರ್ಷ ಸಡಿಲಿಕೆ ಈ ನಿಯಮಕ್ಕೆ ಅನುಸಾರವಾಗಿ ಇದೆಯೇ ? ಯತೀಶ , ಎಂ . ಎನ್ ಹಾಸನ ಜಿಲ್ಲೆ   1977 ರ ಕರ್ನಾಟಕ ಸಿವಿಲ್ ಸೇವಾ ( ಸಾಮಾನ್ಯ ನೇಮಕಾತಿ ) ನಿಯಮಾವಳಿಯ ನಿಯಮ ( 9 ) ರಂತೆ  ಸರ್ಕಾರಿ ನೌಕರರಿಗೆ ಅವರು ಸಲ್ಲಿಸಿದ ಸೇವೆಗಳಿಗೆ ಅನುಕೂಲವಾಗಿ ಗರಿಷ್ಠ 10 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ . ಆದರೆ , ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸರ್ಕಾರವು ವಿಶೇಷ ನಿಯಮಾವಳಿಯನ್ನು ರದ್ದುಗೊಳಿಸಿ , ಐದು ವರ್ಷಗಳ ಕಾಲ ಸರ್ಕಾರಿ ನೌಕರರಿಗೆ ಸಡಿಲಿಕೆ ನೀಡಿದೆ . ಈಗಾಗಲೇ ಈ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 30 ವರ್ಷ , ಹಿಂದುಳಿದ ವರ್ಗಕ್ಕೆ 40 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 45 ವರ್ಷಗಳನ್ನು ಈ ವಿಶೇಷ ನಿಯ...

ಸ್ಥಗಿತವೇತನ ಬಡ್ತಿ? - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ

ಸ್ಥಗಿತವೇತನ ಬಡ್ತಿ ? -   ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ನಾನು ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದು , ದಿನಾಂಕ 31-7-2021 ರಂದು ನಿವೃತ್ತಳಾಗಿರುತ್ತೇನೆ . ನನ್ನ 2021 ರ ಜೂನ್ ತಿಂಗಳ ವೇತನ ರೂ . 58200 + 5800 ( ರೂ . 30350-58250 ) ಆಗಿರುತ್ತದೆ . ನನ್ನ ವಾರ್ಷಿಕ ಬಡ್ತಿ ಆಗಸ್ಟ್ ನಲ್ಲಿದ್ದು ಪ್ರಸ್ತುತ ಜನವರಿ - ಜುಲೈ ತಿಂಗಳಿನಲ್ಲಿ ಮಂಜೂರಾಗುತ್ತಿರುವುದರಿಂದ ನನಗೆ 8 ನೇ ಸ್ಥಗಿತವೇತನ ಬಡ್ತಿ ಪಡೆಯಲು ಅವಕಾಶವಿದೆಯೇ ? ಸ್ಥಗಿತವೇತನ ಬಡ್ತಿ ಮೊಬಲಗು ತಿಳಿಸಿ . | ಎಂ.ಎಸ್ . ನಾಗರತ್ನ ಹಾಸನ ದಿನಾಂಕ 4-5-2019ರ ಸರ್ಕಾರದ ಅಧಿಕೃತ ಜ್ಞಾಪನ ಪತ್ರದ ( ಸಂಖ್ಯೆ ಎಫ್‌ಡಿ 1 ಎಸ್‌ಆರ್‌ಎಸ್ 2019 ) ಕಂಡಿಕೆ 2 ( 7 ) ರಲ್ಲಿ ವಾರ್ಷಿಕ ವೇತನ ಬಡ್ತಿಯಂತೆಯೇ ಸ್ಥಗಿತವೇತನ ಬಡ್ತಿಗಳನ್ನು 1 ನೇ ಜನವರಿ ಅಥವಾ 1 ನೇ ಜುಲೈ ತಿಂಗಳಿನಲ್ಲಿಯೇ ಮಂಜೂರಾಡಬೇಕೆಂದು ಸೃಷ್ಟಿಕರಣದ ಸೂಚನೆಯನ್ನು ನೀಡಿದೆ . ಆದ್ದರಿಂದ ನಿಮಗೆ 1 ನೇ ಜುಲೈ 2021 ರಂದು 8 ನೇ ಸ್ಥಗಿತ ವೇತನ ಬಡ್ತಿಯನ್ನು ರೂ . 1450 ಮಂಜೂರು ಮಾಡಿದಾಗ ನಿಮ್ಮ ವೇತನ ರೂ . 58250 + 7250 ಆಗುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಕೈಪಿಡಿ ಕೃತಿಯನ್ನು ನೋಡಬಹುದು . KCSR Book Kannada offer price @₹540/- ಕೃಪೆ : ವಿಜಯವ...

20 ವರ್ಷದ ಹೆಚ್ಚುವರಿ ವೇತನಬಡ್ತಿ? - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ

  20 ವರ್ಷದ ಹೆಚ್ಚುವರಿ ವೇತನಬಡ್ತಿ? -   ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ನಾನು 1994 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದೆ .10 ವರ್ಷದ ಕಾಲಮಿತಿ ಬಡ್ತಿಯನ್ನು ಪಡೆದಿದ್ದೇನೆ . 2006 ರಲ್ಲಿ ಪ್ರೌಢಶಾಲೆಗೆ ಪದೋನ್ನತಿ ಹೊಂದಿ 15 ವರ್ಷದ ಸ್ವಯಂಚಾಲಿತ ಬಡ್ತಿ ಪಡೆದಿದ್ದೇನೆ . ನನಗೆ 20 ವರ್ಷದ ಹೆಚ್ಚುವರಿ ವೇತನಬಡ್ತಿ ಲಭ್ಯವಾಗುತ್ತದೆಯೇ ? ರಾಜು ತಳವಾರ್‌ ಹಾವೇರಿ 9-8-2020ರ ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 13 ಎಸ್‌ಆರ್‌ಪಿ 2002 ರ 6 ( ಆ ) ರೀತ್ಯಾ ಈಗಾಗಲೇ ಒಂದು ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ 20 ವರ್ಷದ ಹೆಚ್ಚುವರಿ ವೇತನ ಬಡ್ತಿಯನ್ನು ನೀಡತಕ್ಕದ್ದಲ್ಲವೆಂದು ಸೂಚಿಸಿದೆ . ಆದಕಾರಣ , ನೀವು ಪದೋನ್ನತಿ ಹೊಂದಿ , ಒಂದೇ ಹುದ್ದೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸದೇ ಇರುವುದರಿಂದ ನಿಮಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕವನ್ನು ನೋಡಬಹುದು  . KCSR Book Kannada offer price @₹540/- ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು    ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ. ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ. https://mydukaan.io/ksgea...

ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್ ಘೋಷಣೆಯಾಗಿ ಫಲಿತಾಂಶ ವಿಳಂಬವಾಗಿ ಪ್ರಕಟವಾಯಿತು . ಇದರಿಂದಾಗಿ ನನಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಕೈತಪ್ಪಿತು - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ

ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್ ಘೋಷಣೆಯಾಗಿ ಫಲಿತಾಂಶ ವಿಳಂಬವಾಗಿ ಪ್ರಕಟವಾಯಿತು . ಇದರಿಂದಾಗಿ ನನಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಕೈತಪ್ಪಿತು -  ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ನನ್ನ ತಂದೆಯವರು ಸರ್ಕಾರಿ ನೌಕರರಾಗಿದ್ದು , 2019 ರ ಜೂನ್ ತಿಂಗಳಿನಲ್ಲಿ ನಿಧನ ಹೊಂದಿದರು . ನಾನು ಎಸ್ ಎಸ್‌ಎಲ್‌ಸಿ ಪಾಸಾಗಿದ್ದು 2020 ರಲ್ಲಿ ಪಿಯುಸಿ ಪರೀಕ್ಷೆ ಯನ್ನು ಬರೆದಿದ್ದು ಕೋವಿಡ್ -19 ಸಾಂಕ್ರಾಮಿಕದಿಂದ ಲಾಕ್‌ಡೌನ್ ಘೋಷಣೆಯಾಗಿ ಫಲಿತಾಂಶ ವಿಳಂಬವಾಗಿ ಪ್ರಕಟವಾಯಿತು . ಇದರಿಂದಾಗಿ ನನಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಕೈತಪ್ಪಿತು . ಡಿ ಗುಂಪಿನ ಹುದ್ದೆ ನೀಡುತ್ತೇವೆಂದು ತಿಳಿಸುತ್ತಿದ್ದಾರೆ . ಇದಕ್ಕೆ ಸೂಕ್ತ ಪರಿಹಾರವೇನು ? ಪ್ರಶಾಂತ್ ಎನ್ . ಭಟ್ ಕಾರವಾರ  1996 ರ ಕರ್ನಾಟಕ ಸರ್ಕಾರಿ ಸೇವಾ ( ಅನುಕಂಪದ ಮೇರೆಗೆ ನೇಮಕಾತಿ ) ನಿಯಮಾವಳಿಯ ನಿಯಮ 4 ರ ಮೇರೆಗೆ ಸಿ ಗುಂಪಿನ ಹುದ್ದೆಯಾದ ದ್ವಿತೀಯ ದರ್ಜೆ ಸಹಾಯಕರ ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ವರ್ಷದೊಳಗೆ ಹೊಂದಿರಬೇಕು ಹಾಗೂ ನಿಯಮ 5 ರಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು , ಆದರೆ 2019-20ನೇ ಸಾಲಿನಲ್ಲಿ ಕೋವಿಡ್ -19 ಸಾಂಕ್ರಾ ಮಿಕದ ಪ್ರಯುಕ್ತ ದೇಶಾದ್ಯಂತ ಲಾಕ್ಡೌನ್ ಘೋಷಣೆ ಯಾದ್ದರಿಂದ ...

2020ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗಿರುವ ಸರ್ಕಾರಿ ಅಧಿಕಾರಿ/ನೌಕರರ ಆದ್ಯ ಗಮನಕ್ಕೆ

 2020ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗಿರುವ ಸರ್ಕಾರಿ ಅಧಿಕಾರಿ/ನೌಕರರ ಆದ್ಯ ಗಮನಕ್ಕೆ      ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಗಳು 2021ನೇ ಅಕ್ಟೋಬರ್ 21-23ರವರೆಗೆ ದಾವಣಗೆರೆ ನಗರದಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು Online ಮೂಲಕ ನೋಂದಣಿಯಾಗದೆ  ಇರುವವರು (ಈಗಾಗಲೇ ನೋಂದಾಯಿಸಿರುವವರನ್ನು ಹೊರತುಪಡಿಸಿ)  ದಿನಾಂಕ: 04-10-2021 ರೊಳಗಾಗಿ ಕಡ್ಡಾಯವಾಗಿ ಈ ಕೆಳಕಂಡ ಲಿಂಕ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ತಿಳಿಸಿದೆ. ಆನ್‌ಲೈನ್ ನೊಂದಣಿ ಪ್ರಾರಂಭ ದಿನಾಂಕ 01-10-2021 ಆನ್‌ಲೈನ್ ನೊಂದಣಿ ಕೊನೆಯ  ದಿನಾಂಕ: 04-10-2021 Online  ಮೂಲಕ ನೊಂದಣಿಯಾಗಲು ಈ ಲಿಂಕ್ ಉಪಯೋಗಿಸಿ  http://bit.ly/ksgeasportsreg -:: ಷರತ್ತು ಮತ್ತು ನಿಯಮಗಳು ::- 1. ಈಗಾಗಲೇ ಮಾರ್ಚ್ 2021ರಲ್ಲಿ Online ಮೂಲಕ ನೋಂದಣಿ ಮಾಡಿರುವವರು ಮತ್ತೊಮ್ಮೆ ನೋಂದಣಿ ಮಾಡುವ ಅವಶ್ಯಕತೆ ಇರುವುದಿಲ್ಲ. 2. Online ನಲ್ಲಿ ನೋಂದಣಿ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಸಂಘ ಹಾಗೂ ಇಲಾಖಾ ವತಿಯಿಂದ ನೋಂದಣಿ ಕಾರ್ಡ್ನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ವಿತರಿಸಲಾಗುವುದು. 3. ನೋಂದಣಿ ಕಾರ್ಡ್ ಹಾಗೂ ಟ್ರಾಕ್‌ಸೂಟ್–ಕ್ಯಾಪ್ ಪಡೆ...

HRMS-K2 ಸಲಹೆ -59ಹಬ್ಬದ ಮುಂಗಡ (FA) ಬಿಲ್ಲನ್ನು ತಯಾರಿಸುವ ಬಗ್ಗೆ.

HRMS-K2 ಸಲಹೆ -59 ಹಬ್ಬದ ಮುಂಗಡ (FA) ಬಿಲ್ಲನ್ನು ತಯಾರಿಸುವ ಬಗ್ಗೆ.  HRMS n Pay Roleನಲ್ಲಿ  loan & recovery select ಮಾಡುವುದು. Kgid no ಹಾಕಿದ ನಂತರ +ಪ್ಲಸ್ ಮಾರ್ಕ್ ಚಿನ್ನೆಯನ್ನು  ಕ್ಲಿಕ್ ಮಾಡುವುದು ನಂತರ recovery name ನಲ್ಲಿ festival advance select ಮಾಡಿ  ಮಂಜೂರಾತಿ ಆದೇಶ ಸಂಖ್ಯೆ ಮತ್ತು ದಿನಾಂಕವನ್ನು entry ಮಾಡಬೇಕು principal monthly amount 1000 principal monthly installment 10 ಎಂದು ನಮೂದಿಸುವುದು ಮತ್ತು add ಮಾಡಿ approve ಮಾಡುವುದು. ನಂತರ ಅರಿಯರ್ಸ್ menu ಗೆ ಹೋಗಿ generate advance bill ಅದರಲ್ಲಿ FA bill generation select ಮಾಡಿ month & year-head of account, est ಹಾಕಿ FA bill generation ಮಾಡುವುದು ನಂತರ arrears before approvel ಗೆ ಬಂದು FA before approvel select ಮಾಡಿ view report print report print ತೆಗೆದು ಕೊಳ್ಳುವುದು. ನಂತರ  send approve FA arrears  Bill to k2 select madi Kgid no ಹಾಕಿ month, year,  head of account , est no ನಮೂದಿಸಿ get ಮೇಲೆ ಕ್ಲಿಕ್ ಮಾಡಿ  send to k2 ಮಾಡುವುದು.

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers