ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು -01 ಅಧಿಕಾರಿ ಹಾಗೂ ನೌಕರರ ಆದ್ಯ ಗಮನಕ್ಕೆ | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ಮಾಹಿತಿ , ದಿನಾಂಕ : 22-03-2012ರಂದು 50 ವರ್ಷದೊಳಗಿರುವ ಮತ್ತು ಸರ್ಕಾರವು ನಿರ್ದಿಷ್ಟಪಡಿಸಿರುವ ಕೆಲವು ವೃಂದದ ನೌಕರರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸರ್ಕಾರಿ ನೌಕರರು ಪದೋನ್ನತಿ , ವೇತನ ಬಡ್ತಿ , ಪರೀಕ್ಷತಾವಧಿ ಸೌಲಭ್ಯಗಳನ್ನು ಪಡೆಯಲು ಈ ಕೆಳಕಂಡ ದಿನಾಂಕದೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಕಡ್ಡಾಯವಾಗಿ ತೇರ್ಗಡೆ ಹೊಂದಬೇಕಾಗಿರುತ್ತದೆ . 1 , ಪರೀಕ್ಷತಾವಧಿಗಾಗಿ : 22-03-2022 2. ಪದೋನ್ನತಿಗಾಗಿ : 22-03-2022 3 , ವಾರ್ಷಿಕ ವೇತನ ಬಡ್ತಿಗಾಗಿ : 22-03-2023 4. ಗ್ರೂಪ್ ಡಿ ನೌಕರರಿಗೆ ದ್ವಿ.ದ.ಸ. , ಬಡ್ತಿಗಾಗಿ : 22-03-2023 ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳು ಪುನರಾರಂಭಗೊಂಡಿದ್ದು , ದಿನಾಂಕ : 02-07-2021 ರಿಂದ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ . ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ . : ಸಿ. ಎಸ್ . ಷಡಾಕ್ಷರಿ ರಾಜ್ಯಾಧ್ಯಕ್ಷರು.